ಜಗತ್ತು ಪರಿವರ್ತನೆಯ ಕಾಲದಲ್ಲಿದೆ. ಜಾಗತೀಕರಣ, ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಪ್ರಯಾಣ, ಪರಿಸರ ಸವಾಲುಗಳು, ಧಾರ್ಮಿಕ ಸಂಘರ್ಷ, ಉದಯೋನ್ಮುಖ ಆರ್ಥಿಕತೆಗಳು ಮತ್ತು ಬಹು-ಧ್ರುವೀಯ ಪ್ರಪಂಚ ಇವೆಲ್ಲವೂ ಪುರಾತನ ಮಾನವ ಸಂದಿಗ್ಧತೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಆಲೋಚನೆಯಲ್ಲಿ ಬದಲಾವಣೆಗಳನ್ನು ಹೊಂದಿವೆ.
ಇಂದಿನ ಸವಾಲುಗಳನ್ನು ಪರಿಹರಿಸಲು ನೀಡಲಾಗುವ ಅನೇಕ ಪರಿಹಾರಗಳು ಪುರಾತನ ಚಿಂತನೆ, ಹಳೆಯ ಸಿದ್ಧಾಂತ ಮತ್ತು ಅಸಮರ್ಪಕವೆಂದು ತೋರುತ್ತದೆ. ಈ ಪರಿಹಾರಗಳು ಮತ್ತು ಅವುಗಳನ್ನು ಪ್ರಚಾರ ಮಾಡಲು ರಚಿಸಲಾದ ಸಂಸ್ಥೆಗಳು ಪ್ರಾಥಮಿಕವಾಗಿ ಪಾಶ್ಚಿಮಾತ್ಯರ ದೃಷ್ಟಿಕೋನದಿಂದ ಹುಟ್ಟಿಕೊಂಡಿವೆ, ಹಾಗೆಯೇ ಈ ಚಿಂತನೆ ಸುಮಾರು ಅರ್ಧ ಸಹಸ್ರಮಾನದಿಂದ ವಿಶ್ವ ವ್ಯವಹಾರಗಳಲ್ಲಿ ಪ್ರಬಲವಾಗಿದೆ. ಈ ವಿಶ್ವ ದೃಷ್ಟಿಕೋನವು ಇತಿಹಾಸ, ಪುರಾಣಗಳು, ಬೌದ್ಧಿಕ ಸಂಪ್ರದಾಯಗಳು ಮತ್ತು ಯುರೋಪ್ ಮತ್ತು ಅಮೆರಿಕಕ್ಕೆ ನಿರ್ದಿಷ್ಟವಾದ ಧಾರ್ಮಿಕ ನಂಬಿಕೆಗಳಿಂದ ಆಳವಾಗಿ ರೂಪಿಸಲ್ಪಟ್ಟಿದೆ.
ಲೋಲಕವು ಮತ್ತೊಮ್ಮೆ ಏಷ್ಯಾದತ್ತ ತಿರುಗುತ್ತಿರುವಾಗ ಮತ್ತು ಉದಯೋನ್ಮುಖ ಆರ್ಥಿಕತೆಗಳು ಮತ್ತು ಶಕ್ತಿಗಳು ಅವರ ಸಾಂಸ್ಕೃತಿಕ ಧ್ವನಿಯನ್ನು ಕಲಕುವ ಮತ್ತು ಕಂಡುಕೊಳ್ಳುವಾಗ, ನಮಗೆ ಒಂದು ಸುವರ್ಣ ಅವಕಾಶ ಒದಗಿಸಿದೆ. ನಮ್ಮಲ್ಲಿ ಅನೇಕರು ಪ್ರಪಂಚದ ವೈವಿಧ್ಯಮಯ ಧ್ವನಿಗಳನ್ನು ತಳ್ಳಿಹಾಕಬಹುದು – ವಿಶೇಷವಾಗಿ ಅವರು ದೀರ್ಘಕಾಲದ ನಂಬಿಕೆಗಳಿಗೆ ಸವಾಲು ಹಾಕಿದಾಗ. ಅಥವಾ ನಾವು ಹೊಸ ಮಾದರಿಗಳನ್ನು ಒಪ್ಪಿಕೊಳ್ಳಬಹುದು, ಅವುಗಳು ಪಾಶ್ಚಿಮಾತ್ಯರ ಸವಲತ್ತು ಸ್ಥಾನಕ್ಕೆ ಇರಬಹುದು, ಆದರೆ ಪಾಶ್ಚಾತ್ಯರ ಅನುಕೂಲಕ್ಕಾಗಿ ಮಾತ್ರವಲ್ಲ, ಎಲ್ಲಾ ಮಾನವೀಯತೆಗೂ ಹೊಸದಾಗಿ ಜಗತ್ತನ್ನು ರೂಪಿಸುವ ಭರವಸೆ ನೀಡಬೇಕು.
ನಾವೆಲ್ಲರೂ ಕೇಳಿದ ಹಳೆಯ ಮಾದರಿಗಳಲ್ಲಿ ಒಂದನ್ನು ಕ್ರಿಶ್ಚಿಯನ್ನರು ಬಳಸುವ “ಒಳ್ಳೆಯ ಸುದ್ದಿ” ಎಂಬ ಪದಗುಚ್ಚ. (“ಒಳ್ಳೆಯ ಸುದ್ಧಿ” ಎಂದರೆ ಯೇಸು ಕ್ರಿಸ್ತನ ಜೀವನ ಕಥೆ ಬೈಬಲ್ ಪುಸ್ತಕದಲ್ಲಿ ಬರೆದಂತೆ). ಕೃತರ “ಒಳ್ಳೆಯ ಸುದ್ದಿ” ಏನೆಂದರೆ ಯೇಸು ಕ್ರಿಸ್ತನು ಮಾನವೀಯತೆಯ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಹುಟ್ಟಿದ ಭಗವಂತನ ಒಬ್ಬನೇ ಮಗ. ಹಿಂದೂಗಳು ಇಂತಹ ಪ್ರಾಯಶ್ಚಿತ್ತವನ್ನು ಅನಗತ್ಯವೆಂದು ಭಾವಿಸುತ್ತಾರೆ. ಏಕೆಂದರೆ ಹಿಂದೂಗಳ ನಂಬಿಕೆಯಲಾದಲ್ಲಿ ಮನುಷ್ಯನು ಪಾಪಿಯಲ್ಲ, ದೈವಅಂಶ ಸಂಬೂತನಾಗಿದ್ದಾನೆ, ಮತ್ತು ನಾವು, ಪ್ರತಿಯೊಬ್ಬರೂ, ಯೇಸುವಿನಂತೆಯೇ ಅದೇ ಸಾಮರ್ಥ್ಯವನ್ನು ಹೊಂದಿದ್ದೇವೆ, ಈ ದೈವತ್ವವನ್ನು ಇಲ್ಲಿ ಮತ್ತು ಈಗ ನಮ್ಮೊಳಗೆ ಬಹಿರಂಗಪಡಿಸಲು – ಬೇರೊಬ್ಬರ ಹಿಂದಿನ ತ್ಯಾಗದ ಅಗತ್ಯವಿಲ್ಲ. ಈ ಸಬಲೀಕರಣ ಕಲ್ಪನೆಯನ್ನು ವಿವರಿಸಲು ನಾವು “ಹಿಂದೂ ಶುಭ ಸಮಾಚಾರ” ಎಂಬ ಪದವನ್ನು ರಚಿಸಿದ್ದೇವೆ.
ಇಂತಹ ಚಿಂತನೆ ಹಿಂದೂ ಶುಭ ಸಮಾಚಾರದತ್ತ ಬರೀ ಒಂದು ಪಕ್ಷಿ ನೋಟ ಅಷ್ಟೇ. ಈ ಸಮಾಚಾರವೂ ಮನುಷ್ಯನನ್ನು ಸ್ವಸಾಮರ್ಥ್ಯ ಹೆಚ್ಚಿಸುವತ್ತ, ಮತ್ತು ದೇವರು, ಮನುಷ್ಯ ಮತ್ತು ಬ್ರಹ್ಮಾಂಡದ ಐಕ್ಯತೆಯನ್ನು ಒತ್ತಿಹೇಳುತ್ತದೆ. ಏಕರೂಪತೆಗಿಂತ ವೈವಿಧ್ಯತೆಯು ವಾಸ್ತವದ ನಿಜವಾದ ತಿಳುವಳಿಕೆಯಾಗಿದೆ. ಅಂತಹ ವಿಶ್ವ ದೃಷ್ಟಿಕೋನದ ಕೆಲವು ಪ್ರಮುಖ ಭರವಸೆಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:
- ನಮ್ಮ ಹಿಂದೂ ಧರ್ಮದಲ್ಲಿ, ಕ್ರಿಶ್ಚಿಯನ್ ನಂಬಿಕೆಯ “ಒರಿಜಿನಲ್ ಸಿನ್” ನಂತಹ ಯಾವುದೇ ವಿಷಯಗಳಿಲ್ಲ. ಸಂಸ್ಕೃತ ಪದ, ಸತ್-ಚಿತ್- ಆನಂದ ವಿವರಿಸಿದಂತೆ ನಾವೆಲ್ಲರೂ ಮೂಲತಃ ದೈವಅಂಶಸಂಬೂತರು.
- ಕ್ರಿಶ್ಚಿಯನ್ ಧರ್ಮ ಮತ್ತು ಹೆಚ್ಚಿನ ಅಬ್ರಹಾಮಿಕ್ ಧರ್ಮಗಳಂತೆ ಐತಿಹಾಸಿಕ ಪ್ರವಾದಿಗಳು ಮತ್ತು ಮೆಸ್ಸೀಯರು ಆಧ್ಯಾತ್ಮಿಕ ಸತ್ಯವನ್ನು ನಿಯಂತ್ರಿಸುವುದಿಲ್ಲ. ಯೋಗ ಮತ್ತು ಸಂಬಂಧಿತ ಆಧ್ಯಾತ್ಮಿಕ ಅಭ್ಯಾಸಗಳು ಐತಿಹಾಸಿಕವಾಗಿ ಸ್ವಾತಂತ್ರ್ಯದ ಸ್ಥಿತಿಯನ್ನು ಸಾಧಿಸಲು ನಮಗೆ ಅವಕಾಶ ಮಾಡಿಕೊಡುತ್ತವೆ. ಕೋಮು ಗುರುತುಗಳು, ಜನಾಂಗಗಳು, ಕುಲ-ಗೋತ್ರಗಳು ಮತ್ತು ಕೆಲವು ವಿಶಿಷ್ಟ ಐತಿಹಾಸಿಕ ಘಟನೆಯ ಆಧಾರದ ಮೇಲೆ ಧಾರ್ಮಿಕ ಪ್ರತ್ಯೇಕತೆಗಳು ನಮಗೆ ದಾರಿದೀಪವಾಗಿ ಭಾಗ್ಯವಂತನತ್ತ ನಡೆಸುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಯಾಗುದೇ ಗುರುಗಳ ಅಥವಾ ಪರಂಪರೆಯ ಮೇಲೆ ಅಥವಾ ಅವರ ನಂತರ ವಿಕಸನಗೊಂಡ ಅಧಿಕಾರದ ಸಂಸ್ಥೆಗಳ ಮೇಲೆ ಅವಲಂಬಿತವಾಗಿಲ್ಲ.
- ಧರ್ಮ ಮತ್ತು ವಿಜ್ಞಾನದ ನಡುವೆ ಯಾವುದೇ ಮೂಲಭೂತ ಸಂಘರ್ಷವಿಲ್ಲ, ಹಿಂದೆ ಯಾವುದೂ ಇರಲಿಲ್ಲ.
- ಪಾಶ್ಚಾತ್ಯ ವಿಶ್ವವಿಜ್ಞಾನ ಮತ್ತು ಪುರಾಣಗಳಲ್ಲಿರುವಂತೆ “ಅವ್ಯವಸ್ಥೆ”ಯ ಬಗ್ಗೆ ಯಾವುದೇ ಭಯವಿಲ್ಲ. ನಕಾರಾತ್ಮಕ ಅರ್ಥದಲ್ಲಿ ಅಸ್ತವ್ಯಸ್ತವಾಗಿರುವಂತೆ ಸಾಮಾನ್ಯವಾಗಿ ಪರಿಗಣಿಸಲ್ಪಡುವುದು ವಾಸ್ತವದ ನೈಸರ್ಗಿಕ ಮತ್ತು ಸಾಮಾನ್ಯ ಅಭಿವ್ಯಕ್ತಿ. ಮಾನವನ ಅರಿವಿನ ಮಿತಿಗಳು ಮಾತ್ರ ಪ್ರಕೃತಿಯ ಸಂಕೀರ್ಣತೆಯನ್ನು ತಪ್ಪಾಗಿ ಅರ್ಥೈಸುತ್ತವೆ, ಅದನ್ನು ಭಯ ಮತ್ತು ದುಷ್ಟವೆಂದು ನೋಡುತ್ತವೆ ಮತ್ತು ನಾಶಪಡಿಸಬೇಕೆಂದು ತೋರುತ್ತವೆ.
- ಪ್ರಕೃತಿಯನ್ನು ಗೌರವದಿಂದ ಉಳಿಸಿಕೊಂಡು ಆನಂದಮಯ ಮಾನವ ಜೀವನ ಸಾಧ್ಯ. “ಮುನ್ನಡೆಯಲು” ಮತ್ತು “ಪ್ರಗತಿ” ಮಾಡಲು ಪ್ರಕೃತಿಯನ್ನು ಧ್ವಂಸ ಮಾಡಬೇಕಾಗಿಲ್ಲ – ನಿಜಕ್ಕೂ ನಮ್ಮನ್ನು ಉಳಿಸಿಕೊಳ್ಳುವ ಅಂತರ್ಸಂಪರ್ಕದ ಸರಪಳಿಯ ಕಡಿತದಿಂದ ನಮ್ಮ ವಿಕಾಸವು ತ್ವರಿತಗೊಳ್ಳುತ್ತದೆ.
- ನಮ್ಮ ಅಂತಿಮ ಗುರಿ ತಲುಪಲು, ಹಾಗೂ ನಾವು ಮುನ್ನಡೆಯಲು ಯಾವುದೇ ಕೇಂದ್ರೀಕೃತ ಧಾರ್ಮಿಕ ಪ್ರಾಧಿಕಾರದ ಅಗತ್ಯವಿಲ್ಲ. ಹಿಂದಿನ ಉದಾಹರಣೆಗಳ ಮತ್ತು ಸಾಧನಗಳನ್ನು ಮಾರ್ಗಸೂಚಿಗಳಾಗಿ ಬಳಸಿಕೊಂಡು ಒಬ್ಬರು ತಮ್ಮದೇ ಆದ ಹಾದಿಯನ್ನು ಪ್ರಯೋಗಿಸಬಹುದು ಮತ್ತು ಕಂಡುಹಿಡಿಯಬಹುದು.
- ಎಲ್ಲಾ ನಂಬಿಕೆಗಳು ಮತ್ತು ಸಂಪ್ರದಾಯಗಳ ನಡುವೆ ಪರಸ್ಪರ ಗೌರವವು ಹಿಂದೂ ಧರ್ಮದ ಒಂದು ವಿಶೇಷತೆ. “ರಾಜಕೀಯ ಸರಿಯಾಗಿರುವಿಕೆಗೆ” ಅಥವಾ ಹೊರಗಿನಿಂದ ಹೇರಲ್ಪಟ್ಟ ಅಸಹ್ಯಕರ ನಂಬಿಕೆಗಳ ಅವಶ್ಯಕತೆಯಿಲ್ಲ. ವಿಭಿನ್ನ ಮಾರ್ಗಗಳನ್ನು ಅನುಸರಿಸುವ ಇತರರಿಗೆ ಇದು “ಸಹನೆ”. ಪ್ರತ್ಯೇಕತೆ ಮತ್ತು ಇತರರನ್ನು ಒಬ್ಬರ ಸ್ವಂತ ಧರ್ಮಕ್ಕೆ ಪರಿವರ್ತಿಸುವ ಆದೇಶಗಳನ್ನು ನಾವು ತಿರಸ್ಕರಿಸುತ್ತೇವೆ.
ಈ ವೆಬ್ಸೈಟ್ https://beingdifferentbook.com ಹಿಂದೂ ಸುವಾರ್ತೆಯ ಅಡಿಯಲ್ಲಿ ಇಂತಹ ವ್ಯಾಪಕವಾದ ಆಲೋಚನೆಗಳು, ಉದಾಹರಣೆಗಳು ಮತ್ತು ಅಭ್ಯಾಸಗಳ ಕುರಿತು ಪ್ರಬಂಧಗಳು ಮತ್ತು ಚರ್ಚೆಗಳನ್ನು ನೀಡುತ್ತದೆ. ಈ ಪ್ರಬಂಧಗಳು ಭಾರತದ ಧರ್ಮ ಸಂಪ್ರದಾಯಗಳಾದ ಹಿಂದೂ ಧರ್ಮ, ಬೌದ್ಧಧರ್ಮ, ಸಿಖ್ ಧರ್ಮ ಮತ್ತು ಜೈನ ಧರ್ಮಗಳ ತಾತ್ವಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನಗಳನ್ನು ಒಳಗೊಂಡಿವೆ. ಮೇಲಿನವುಗಳನ್ನು ನಮ್ಮ ಮಾರ್ಗದರ್ಶಿ ಕೇಂದ್ರಗಳಾಗಿ ಮತ್ತು ನಡೆಯುತ್ತಿರುವ ಚರ್ಚೆಗಳ ಮೂಲಕ, ಅಂತರ್ ಧರ್ಮದ ಸಂಬಂಧಗಳು, ನಂಬಿಕೆ ಮತ್ತು ವಿಜ್ಞಾನದ ನಡುವಿನ ಸಂಬಂಧಗಳು ಮತ್ತು ಮಾನವೀಯತೆ ಮತ್ತು ಪ್ರಕೃತಿಯ ನಡುವಿನ ಸಂಬಂಧಗಳ ಹೊಸ ಯುಗವನ್ನು ತರಲು ನಾವು ಆಶಿಸುತ್ತೇವೆ.
ಇತ್ತೀಚಿನ ಪುಸ್ತಕ, ಬೀಯಿಂಗ್ ಡಿಫರೆಂಟ್: ಆನ್ ಇಂಡಿಯನ್ ಚಾಲೆಂಜ್ ಟು ವೆಸ್ಟರ್ನ್ ಯೂನಿವರ್ಸಲಿಸಂ (ಹಾರ್ಪರ್ಕಾಲಿನ್ಸ್ , 2011) (BEING DIFFERENT: An Indian Challenge to Western Universalism), ಈ ವಿಶ್ವದೃಷ್ಟಿಕೋನವು ಮುಖ್ಯವಾಹಿನಿಯ ಪಾಶ್ಚಿಮಾತ್ಯ ಚಿಂತನೆಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಪರಿಶೀಲಿಸುತ್ತದೆ, ಇದರಲ್ಲಿ ಜೂಡಿಯೊ-ಕ್ರಿಶ್ಚಿಯನ್ ವೈವಿಧ್ಯತೆ, ಯುರೋಪಿಯನ್ ಜ್ಞಾನೋದಯದ ಆಧಾರಿತ ಜಾತ್ಯತೀತ ವೈವಿಧ್ಯತೆ ಮತ್ತು ಆಧುನಿಕೋತ್ತರ ಚಿಂತನೆಗಳನ್ನೂ ತೀಕ್ಷಣವಾಗಿ ಅಧ್ಯಯನ ಮಾಡುತ್ತದೆ.
Translation of – https://HinduGoodNews.com